ಕತ್ತಲಲ್ಲಿ ಕೊಲೆ ಕಾದಂಬರಿಯು ಲೇಖಕ ಮಾರ್ಗರೇಟ್ ಅಟ್ವುಡ್ ಅವರ ಮರ್ಡರ್ ಇನ್ ದ ಡಾರ್ಕ್ ಕಾದಂಬರಿಯ ಕನ್ನಡಾನುವಾದವಾಗಿದ್ದು, ಲೇಖಕ ಡಾ. ನವೀನ್ ಹಳೇಮನೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯ ಬೆನ್ನುಡಿಯಲ್ಲಿ “ಲೇಖಕನೇ ಕೊಲೆಗಾರ, ಓದುಗನೇ ಪತ್ತೆದಾರ, ಪುಸ್ತಕವೇ ಬಲಿಪಶು. ಅಥವಾ ಬಹುಶಃ ಲೇಖಕನೇ ಕೊಲೆಗಾರ, ವಿಮರ್ಶಕನೇ ಪತ್ತೆದಾರ ಮತ್ತು ಓದುಗನೇ ಬಲಿಪಶು…” ಹಾಗೂ “ಗಂಡಸರಿಗೆ ತಮ್ಮನ್ನು ನೋಡಿ ಹೆಂಗಸರು ನಕ್ಕಾರೆಂಬ ಭಯ. ಹೆಂಗಸರಿಗೆ ತಮ್ಮನ್ನು ಗಂಡಸರು ಕೊಂದಾರೆಂಬ ಭಯ.” ಎಂದು ಲೇಖಕರು ಈ ಕಾದಂಬರಿಯ ರೋಚಕತೆಯ ಕುರಿತು ಬರೆದಿದ್ದಾರೆ.
ಡಾ. ನವೀನ್ ಹಳೇಮನೆ ಹುಟ್ಟಿದ್ದು 1975 ತುಮಕೂರು ಜಿಲ್ಲೆಯ ಹಾಲುಗೋಣದಲ್ಲಿ. ಭಾಷಾವಿಜ್ಞಾನದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿರುವ ಅವರು ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಬೋಧಕ, ಮೃದುಕೌಶಲ್ಯಗಳ ತರಬೇತುದಾರ ಹಾಗು ಅನುವಾದಕ. ರವೀಂದ್ರನಾಥ ಟ್ಯಾಗೋರರ ಗೀತಾಂಜಲಿ (2007), ಇಂದುಮತಿ ಶೇವರೆ ಅವರ ತಾತ್ಯಾ ಟೋಪೆ (2012) ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ಧಾರೆ. ಸಹ-ಅನುವಾದಕನಾಗಿ ಕಮಲಾ ಮುಕುಂದ ಅವರ ‘ಇವತ್ತು ಶಾಲೆಯಲ್ಲಿ ನೀನೇನು ಪ್ರಶ್ನೆ ಕೇಳಿದೆ?’ ಹಾಗೂ ಆ ಭಾಷೆ ಈ ಭಾಷೆಯಂತಲ್ಲ ಈ-ಭಾಷೆ (2010) ಮತ್ತು ಇಂಗ್ಲಿಷ್ ಕಲಿ(ಯೋ)ಸೋ ಆಟ (2012) ಎಂಬ ಕೃತಿಗಳು ಪ್ರಕಟವಾಗಿವೆ. ಪ್ರಸ್ತುತ ರಾಮನಗರ ಜಿಲ್ಲೆಯ ಲಕ್ಷ್ಮೀಪುರದ ಸರ್ಕಾರಿ ...
READ MORE